ಮಳೆಗಾಲದ ನಮ್ಮ ಆಹಾರ – ಚಟುವಟಿಕೆಗಳು ಹೇಗಿರಬೇಕು ?

by Dr. Prasanna Venkatesh

ದೋಷಗಳ ಮೇಲೆ ಕಾಲದ ಪರಿಣಾಮ  

ಶರೀರದಲ್ಲಿ ವಾತ ಅತಿಶಯವಾಗಿ ವೃದ್ದಿಯಾಗುತ್ತದೆ. ಮಾತ್ರವಲ್ಲ, ಈ ಕಾಲದ ವಾತಾವರಣದ ಕಾರಣದಿಂದಾಗಿ   ಕಫ-ಪಿತ್ತಗಳೂ ಕೆರಳುತ್ತವೆ. ಜೀರ್ಣಶಕ್ತಿ (ಅಗ್ನಿ) ದುರ್ಬಲವಾಗುತ್ತದೆ. ಹಾಗಾಗಿ ಅಗ್ನಿಯನ್ನು ವೃದ್ಧಿಪಡಿಸುವ, ಶರೀರದಲ್ಲಿ  ಮೂರು ದೋಷಗಳನ್ನೂ ಸರಿಪಡಿಸುವ ಆಹಾರ – ಪಾನೀಯಗಳನ್ನು ಸೂಚಿಸುತ್ತಾರೆ.

ಆಹಾರ

  • ಬಳಸುವ ಪದಾರ್ಥಗಳು ಜೀರ್ಣಕ್ಕೆ ಲಘುವಾಗಿದ್ದು ಸ್ವತಃ ಜೀರ್ಣಕ್ರಿಯೆಯನ್ನು ಹೆಚ್ಚಿಸುವಂತಿರಬೇಕು
  • ಹಳೆಯ ಅಕ್ಕಿ, ಗೋಧಿಯ ಪದಾರ್ಥಗಳು, ಮೆಂತ್ಯ, ಹುರುಳಿ
  • ಹೆಸರು / ತೊಗರಿಬೇಳೆ-ಕಾಳುಗಳ ಮಿತವಾದ ಬಳಕೆ ಉತ್ತಮ;

ಬಳಸುವಾಗ ಸ್ವಲ್ಪ ಹರಳೆಣ್ಣೆಯನ್ನು ಸೇರಿಸಿ ಸಂಸ್ಕರಿಸಿ ಬಳಸಿ.

  • ತರಕಾರಿಗಳ ಬಳಕೆಯೂ ಮಿತವಾಗಿರಬೇಕು. ಬಳಸುವುದಿದ್ದಲ್ಲಿ ಬಳ್ಳಿ ತರಕಾರಿಗಳು – ಪಡುವಲ, ಹೀರೆ, ಸೌತೆ ಇತ್ಯಾದಿಗಳನ್ನು ಮಿತವಾಗಿ ಬಳಸಲು ನಿರ್ದೇಶಿಸಿದ್ದಾರೆ.
  • ಸೊಪ್ಪುಗಳ ಬಳಕೆ ಈ ಮಳೆಗಾಲದಲ್ಲಿ ನಿಷೇಧಿಸಿದ್ದಾರೆ.
  • ಹಾಲು, ಮೊಸರು, ಕಡೆದ ಮಜ್ಜಿಗೆ (ಬೆಣ್ಣೆ ತೆಗೆದಿರುವುದು), ಬೆಣ್ಣೆ, ತುಪ್ಪ ಬಳಸಬಹುದು.
  • ಉಪ್ಪು, ಹುಳಿ, ಎಣ್ಣೆ / ತುಪ್ಪ ಇತ್ಯಾದಿಗಳನ್ನು ಸೇರಿಸಿ ಸಂಸ್ಕರಿಸಿದ ಪದಾರ್ಥಗಳು
  • ಜೇನುತುಪ್ಪದ ಬಳಕೆ ಹಿತಮಿತವಾದ ಪ್ರಮಾಣದಲ್ಲಿ ಉತ್ತಮ.

ಪಾನೀಯ       

  • ಶುದ್ಧವಾದ ಮಳೆಯ ನೀರನ್ನು / ಬಾವಿಯ ನೀರನ್ನೂ ಕುದಿಸಿ ಬಳಸುವುದು ಉತ್ತಮ.
  • ಈ ಕಾಲದಲ್ಲಿ ಹಳೆಯ ಮದ್ಯವನ್ನು ಪಾನಕ್ಕಾಗಿ ಬಳಸಬಹುದಾಗಿದೆ..

ವಿಹಾರ

  • ಸ್ನಾನ – ಪಾನಾದಿ ಪ್ರತಿಯೊಂದು ಕೆಲಸಗಳಿಗೂ ಬಿಸಿ ನೀರಿನ ಬಳಕೆ ಹಿತಕರ.
  • ಹಗಲು ನಿದ್ರೆ, ಅತಿಯಾಗಿ ಆಯಾಸವಾಗುವ ಕೆಲಸಗಳು ಇವುಗಳು ವರ್ಜ್ಯ.
  • ಒಂದೊಮ್ಮೆ ಬಿಸಿಲು ಬಂದಲ್ಲಿ ಅತಿ ಬಿಸಿಲಿನ ಸೇವನೆ ಒಳ್ಳೆಯದಲ್ಲ.

ಚಿಕಿತ್ಸಾ

ಅವಶ್ಯಕತೆಯಿರುವಲ್ಲಿ ಮೃದು ವಿರೇಚನ (ಔಷಧಿಗಳನ್ನು ಕುಡಿಸಿ ಭೇದಿಯಾಗುವಂತೆ ಮಾಡುವುದು), ಬಸ್ತಿ (ಔಷಧಯುಕ್ತ enema / ಗುದದ್ವಾರದ ಮುಖಾಂತರ ಔಷಧಿಗಳನ್ನು ನೀಡುವ ವಿಧಾನ)


Author is Chief Physician, Sriranga Ayurveda Chikitsa Mandira, Prakruthi Ayurveda Pratistana ®, Mysore

Ayurveda treatment in India from Prakruti Ayurveda Prathishtana (R) We are ready to help