ಶರದೃತುವಿನಲ್ಲಿ ನಮ್ಮ ಆಹಾರ – ಚಟುವಟಿಕೆಗಳು ಹೇಗಿರಬೇಕು ?

by Dr. Prasanna Venkatesh

ಶರದೃತು –  ಸುಮಾರಾಗಿ ಸೆಪ್ಟೆಂಬರ್ – ಅಕ್ಟೋಬರ್ / ಶರನ್ನವರಾತ್ರಿಯ ಹಿಂದೆ-ಮುಂದೆ.

ದೋಷಗಳ ಮೇಲೆ ಕಾಲದ ಪರಿಣಾಮ

ಮಳೆಗಾಲದ ತಂಪನ್ನು ಹೊಂದಿದ ಶರೀರದಲ್ಲಿ ನಂತರ ಬರುವ ಈ ಕಾಲದ ಉಷ್ಣತೆಯಿಂದಾಗಿ ಪಿತ್ತ ಕೆರಳುತ್ತವೆ. ಜೀರ್ಣಶಕ್ತಿ (ಅಗ್ನಿ) ಮಧ್ಯಮವಾಗಿರುತ್ತದೆ.

ಆಹಾರ

  • ಬಳಸುವ ಪದಾರ್ಥಗಳು ಜೀರ್ಣಕ್ಕೆ ಲಘುವಾಗಿದ್ದು ಶರೀರಕ್ಕೆ ತಂಪನ್ನುಂಟುಮಾಡುವಂತಿರಬೇಕು.
  • ಹಳೆಯ ಅಕ್ಕಿ
  • ಹೆಸರು ಬೇಳೆ-ಕಾಳುಗಳ ಮಿತವಾದ ಬಳಕೆ ಉತ್ತಮ;

ಬಳಸುವಾಗ ಸ್ವಲ್ಪ ತುಪ್ಪವನ್ನು ಸೇರಿಸಿ ಸಂಸ್ಕರಿಸಿ ಬಳಸಿ.

  • ತರಕಾರಿಗಳಲ್ಲಿ ಬಳ್ಳಿ ತರಕಾರಿಗಳು – ಪಡುವಲ, ಬೂದುಗುಂಬಳ, ಹೀರೆ, ಸೋರೆ, ಸೌತೆ, ಹಾಗಲ, ನೆಲ್ಲಿಕಾಯಿ ಇತ್ಯಾದಿಗಳು ಬಳಸಲು ಯೋಗ್ಯ.
  • ಹಾಲು, ಕಡೆದ ಮಜ್ಜಿಗೆ (ಬೆಣ್ಣೆ ತೆಗೆದಿರುವುದು), ಬೆಣ್ಣೆ, ತುಪ್ಪ ಬಳಸಬಹುದು.
  • ಜೇನುತುಪ್ಪದ ಬಳಕೆ ಹಿತಮಿತವಾದ ಪ್ರಮಾಣದಲ್ಲಿ ಉತ್ತಮ.
  • ಅತಿಪ್ರಮಾಣದ ಭೋಜನ, ಮೊಸರು, ಅತಿ ಉಷ್ಣ-ತೀಕ್ಷ್ಣ ಪದಾರ್ಥ ಬಳಸಕೂಡದು

ಪಾನೀಯ

  • ಕುಡಿಯುವ ನೀರನ್ನು ಕುದಿಸುವಾಗ ಶರೀರಕ್ಕೆ ತಂಪನ್ನುಂಟುಮಾಡುವ ಶ್ರೀಗಂಧ, ಲಾವಂಚ, ಸೊಗದೇಬೇರು, ಧನಿಯಾ (ಕೊತ್ತಂಬರಿಬೀಜ) ಇತ್ಯಾದಿಗಳನ್ನು ಸೇರಿಸಿ ಕುದಿಸಿ-ತಣ್ಣಗಾದ ನಂತರ ಬಳಸುವುದು ಉತ್ತಮ.
  • ಈ ಕಾಲದಲ್ಲಿ ಮದ್ಯಪಾನ ಒಳ್ಳೆಯದಲ್ಲ.

ವಿಹಾರ

  • ಹಗಲು ನಿದ್ರೆ, ಅತಿಯಾಗಿ ಆಯಾಸವಾಗುವ ಕೆಲಸಗಳು ಇವುಗಳು ನಿಷಿದ್ಧ.
  • ಅತಿ ಬಿಸಿಲಿನ ಸೇವನೆ ಒಳ್ಳೆಯದಲ್ಲ.

ಚಿಕಿತ್ಸಾ

  • ಅವಶ್ಯಕತೆಯಿರುವಲ್ಲಿ ವಿರೇಚನ (ಔಷಧಿಗಳನ್ನು ಕುಡಿಸಿ ಭೇದಿಯಾಗುವಂತೆ ಮಾಡುವುದು),
  • ರಕ್ತಮೋಕ್ಷಣ (ಕೆಟ್ಟ ರಕ್ತವನ್ನು ಬೇರೆಬೇರೆ ವಿಧಾನಗಳಿಂದ ಶರೀರದಿಂದ ತೆಗೆದು ಶರೀರ ಶುದ್ಧಿಯನ್ನು ಮಾಡುವ ಚಿಕಿತ್ಸೆ).

(ಚಿಕಿತ್ಸೆ ಬಗ್ಗೆ ನುರಿತ ಆಯುರ್ವೇದ ವೈದ್ಯರ ಸಲಹೆ ಅಗತ್ಯ)


Author is Chief Physician, Sriranga Ayurveda Chikitsa Mandira, Prakruthi Ayurveda Pratistana ®, Mysore

Ayurveda treatment in India from Prakruti Ayurveda Prathishtana (R) We are ready to help