(ಶ್ರೀರಾಮಚಂದ್ರಾಪುರ ಮಠದ ಧರ್ಮಭಾರತೀ ಮಾಸಪತ್ರಿಕೆಯಲ್ಲಿ 2017 ಫೆಬ್ರುವರಿ ತಿಂಗಳ ಸಂಚಿಕೆಯಲ್ಲಿ ಆಹಾರ ಕುರಿತಾಗಿ ಪ್ರಕಟಿತವಾದ ಲೇಖನ)
|| ಶ್ರೀಗುರವೇ ನಮಃ ||
ಜಗತ್ತಿನಾದ್ಯಂತ ವಿಜ್ಞಾನವು ಮುಂದುವರೆದಂತೆ ಎಲ್ಲ ಕ್ಷೇತ್ರಗಳಲ್ಲಿ ಹೊಸ ಹೊಸ ಅನ್ವೇಷಣೆಗಳು ಅತಿವೇಗವಾಗಿ ನಿರಂತರವಾಗಿ, ನಡೆಯುತ್ತಲಿವೆ. ವೈದ್ಯಕ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಒಂದು ಆರೋಗ್ಯಸಮಸ್ಯೆಗೆ ಔಷಧೀ / ಚಿಕಿತ್ಸಾರೂಪದ ಪರಿಹಾರವೊಂದನ್ನು ಕಂಡುಹಿಡಿದೆವು ಎನ್ನುವಷ್ಟರಲ್ಲಿ ಮನುಕುಲಕ್ಕೇ ಅಪಾಯ ತಂದೊಡ್ಡಬಲ್ಲ ಮತ್ತೊಂದು...
ಪ್ರತಿಯೊಂದು ಜೀವಿಯೂ ಸುಖವನ್ನು ಹೊಂದಲೆಂದೇ ಸದಾ ಪ್ರಯತ್ನಶೀಲವಾಗಿರುತ್ತವೆ. ಇಂದು ಸಾಮಾನ್ಯವಾಗಿ ನಾವು ಗಮನಿಸುವಂತೆ ಬಹುಪಾಲು ಮಾನವರು ಆ ಸುಖವನ್ನು ಬಾಹ್ಯಪ್ರಪಂಚದಲ್ಲಿ ವಸ್ತುಗಳಲ್ಲಿ, ವಿಷಯಗಳಲ್ಲಿ ಹುಡುಕುವುದನ್ನು ಕಾಣುತ್ತೇವೆ. ವಾಹನ, ಮನೆ / ಬಂಗಲೆ ಇತ್ಯಾದಿ ಆಸ್ತಿ, ಅಂತಸ್ತು, ಇನ್ನಿತರ ವಸ್ತುಗಳಲ್ಲಿ ಆ ಸುಖವನ್ನು ಹುಡುಕುವುದರಲ್ಲಿ ನಿರತರಾಗಿರುವುದನ್ನೂ ಗಮನಿಸುತ್ತೇವೆ.
ಆದರೆ ನಮ್ಮ ಭಾರತೀಯ ಪರಂಪರೆಯಲ್ಲಿ ಗಮನಿಸುವಂತೆ ನಮ್ಮ ಹಿರಿಯರು...